ನೆನಪಿನ ಪುಟಗಳ ತೆರೆದಿಡು ನೀ
ಕಪ್ಪು-ಬಿಳುಪು ಚಿತ್ರಗಳನು
ಬಣ್ಣವ ತುಂಬಿ ಬಣ್ಣಿಸು ನೀ
ಹತ್ತಿದುದು ನಡುವೆಯಲಾದರೂ
ಬಂಡಿಯು ಸಾಗಿದ ಹಾದಿಯ
ತಿಳಿಯ ಬಯಸಿಹೆ ಎನ್ನಿನಿಯ
ಹಳೆ ನೆನಪುಗಳ ಸಿಹಿ-ಕಹಿಗಳನು
ಸವಿಯುತ-ಸಹಿಸುತ ಕೈಹಿಡಿದು
ಆ ಸೂತ್ರಧಾರನ ಮೇರೆಗೆ
ಹೊಸ ನೆನಪುಗಳ ಚಿತ್ರಣದಿ
ನಟಿಸುವ ಈರ್ವರು ಸಂಭ್ರಮದಿ
ಬಂಡಿಯ ಮುಂದಿನ ಮಾರ್ಗವ
ಜೊತೆಯಲಿ ಸೇರಿ ಹುಡುಕೋಣ
ಬಾಳಿನ ಗುರಿಯನು ತಲುಪೋಣ
ಹೊಸ ನೆನಪುಗಳಿಗೆ ತಳಹದಿಯ
ನಾವಿನ್ನು ಜೊತೆಗೂಡಿ ಕಟ್ಟೋಣ
Sunday, October 11, 2009
Thursday, October 1, 2009
ಅರುಣೋದಯ
ಕಣ್ಣೋಟವನೆದುರಿಸಲಾಗದೆ ಕಾಲ್ಬೆರಳುಗಳ ನೋಡಿದೆ
ದನಿಯ ಕೇಳಿ ವಿಸ್ಮಿತಳಾದೆ
ಒಮ್ಮೆ ನೋಡಬೇಕೆಂಬಾಸೆಯ ನೀಗಿಸಲಾಗದೆ
ಮಿಂಚಿನಂತಹ ನೋಟದಿ
ನಾಚಿ ನೀರಾದೆ, ತಲೆ ಬಾಗಿಸಿದೆ
ಮೂಕಳಾದೆ, ಅಧೀರಳಾದೆ
ಇವರು ನನ್ನವರಾಗಬಹುದೆ?
ಬಾನ ಚಂದ್ರಕೆ ಹಾತೊರೆಯುವುದೇ?
ಏಕಾಂತವ ಬಯಸಿ
ಹೆಜ್ಜೆಗೆ ಹೆಜ್ಜೆ ಬೆರೆಸಿ
ಮಹಡಿಗೆ ಮೆಟ್ಟಿಲುಗಳನ್ನೇರಿದೆ
ಅವು ಜೀವನದ ಮೆಟ್ಟಿಲುಗಳಾಗಬಾರದೆ?
ಇವರೆದುರು ನಿಂತಾಗ ತಬ್ಬಿಬ್ಬಾದೆ
ಎವೆಯಿಕ್ಕದೆ ನೋಡಲಾಗದೆ
ಕೈಬಳೆಗಳ ತಿರುವಿದೆ
ಮಾತನಾಡಲಾಗದೆ ಮನಸೋತೆ, ಮೈಮರೆತೆ
ನೀ ನನ್ನವನಾಗಬಾರದೆ?
ಎಂದು ನಾ ಕೇಳಲಾಗದಾದರೂ
ಭಾವನೆಗಳ ನಾ ಮರೆಮಾಚಲಾದೆ
ಮೊದಲ ನೋಟದಿ ಪ್ರೀತಿಯ ಸ್ಪರ್ಷವಾಯಿತೆ
ಅಂದಿನ ಕಡೆಯ ನೋಟದಿ ಭರವಸೆಯಿತ್ತೆ?
ನಾ ಹೇಳಲಾದೆ
ಏಳು ದಿನಗಳು ಕಾದೆ
ಅದು ನರಕಯಾತನೆಯೆ?
ಕಲ್ಪನೆಗಳು ನಿಲ್ಲದಾಯಿತೆ
ಕೃಷಳಾದೆ,ಹತಾಶಳಾದೆ
ಕಂಬನಿಗಳಿಂದ ತಲೆದಿಂಬ ತೋಯ್ದೆ
ಅಸಹಾಯಳಾದೆ, ದೇವರ ಬೇಡಿದೆ
ನನ್ನ ನಾ ಹಳಿದೆ
ಕಡೆಗೆ ಕರೆ ಬಂದಿತು
ವರನಿಗೆ ಒಪ್ಪಿಗೆಯೆಂದಾಯಿತು
ನಾ ಹರ್ಷದಿ ಕಂಬನಿಯಿತ್ತೆ
ಮತ್ತೆ ಇವರ ನೋಡಲು ಹಾತೊರೆದೆ
ವಿಧಿಯಾಟವ ಹೊಗಳಿದೆ
ನನ್ನ ಬಾಳಲಿ ಅರುಣೋದಯವಾಗಿದೆ
ನೆನಪಿನ ಸುರುಳಿಯಲಿ ಧ್ವನಿಯಿಲ್ಲವಾಗಿದೆ
ಕನಸಿನಂತೆ ಕಣ್ಮುಂದೆ ತೇಲಿದೆ
ಆ ಏಳು ದಿನಗಳ ಕಾದಾಟ
ಈಗ ಸವಿನೆನಪಾಗಿದೆ
ಇವರು ಕಚೇರಿಯಿಂದ ತೆರಳಲು
ನಾ ಕಾಯುತಿರುವೆ
ಆ ಮೊದಲ ನೋಟದ ಮಾಯೆ
ಇಂದಿಗೂ ಮರೆಯಾಗದೆ ಉಳಿದಿದೆ
* ಇದು ಪದ್ಯವೋ ಗದ್ಯವೋ ನನಗೆ ಗೊತ್ತಿಲ್ಲ..ಭಾವನೆಗಳನ್ನು ಬರೆಯಲು ಮನಸಾಯ್ತು..ಮನ:ಪಟಲದಿಂದ ಅಳಿಸದಿರಲಿ ಎಂದು..
ದನಿಯ ಕೇಳಿ ವಿಸ್ಮಿತಳಾದೆ
ಒಮ್ಮೆ ನೋಡಬೇಕೆಂಬಾಸೆಯ ನೀಗಿಸಲಾಗದೆ
ಮಿಂಚಿನಂತಹ ನೋಟದಿ
ನಾಚಿ ನೀರಾದೆ, ತಲೆ ಬಾಗಿಸಿದೆ
ಮೂಕಳಾದೆ, ಅಧೀರಳಾದೆ
ಇವರು ನನ್ನವರಾಗಬಹುದೆ?
ಬಾನ ಚಂದ್ರಕೆ ಹಾತೊರೆಯುವುದೇ?
ಏಕಾಂತವ ಬಯಸಿ
ಹೆಜ್ಜೆಗೆ ಹೆಜ್ಜೆ ಬೆರೆಸಿ
ಮಹಡಿಗೆ ಮೆಟ್ಟಿಲುಗಳನ್ನೇರಿದೆ
ಅವು ಜೀವನದ ಮೆಟ್ಟಿಲುಗಳಾಗಬಾರದೆ?
ಇವರೆದುರು ನಿಂತಾಗ ತಬ್ಬಿಬ್ಬಾದೆ
ಎವೆಯಿಕ್ಕದೆ ನೋಡಲಾಗದೆ
ಕೈಬಳೆಗಳ ತಿರುವಿದೆ
ಮಾತನಾಡಲಾಗದೆ ಮನಸೋತೆ, ಮೈಮರೆತೆ
ನೀ ನನ್ನವನಾಗಬಾರದೆ?
ಎಂದು ನಾ ಕೇಳಲಾಗದಾದರೂ
ಭಾವನೆಗಳ ನಾ ಮರೆಮಾಚಲಾದೆ
ಮೊದಲ ನೋಟದಿ ಪ್ರೀತಿಯ ಸ್ಪರ್ಷವಾಯಿತೆ
ಅಂದಿನ ಕಡೆಯ ನೋಟದಿ ಭರವಸೆಯಿತ್ತೆ?
ನಾ ಹೇಳಲಾದೆ
ಏಳು ದಿನಗಳು ಕಾದೆ
ಅದು ನರಕಯಾತನೆಯೆ?
ಕಲ್ಪನೆಗಳು ನಿಲ್ಲದಾಯಿತೆ
ಕೃಷಳಾದೆ,ಹತಾಶಳಾದೆ
ಕಂಬನಿಗಳಿಂದ ತಲೆದಿಂಬ ತೋಯ್ದೆ
ಅಸಹಾಯಳಾದೆ, ದೇವರ ಬೇಡಿದೆ
ನನ್ನ ನಾ ಹಳಿದೆ
ಕಡೆಗೆ ಕರೆ ಬಂದಿತು
ವರನಿಗೆ ಒಪ್ಪಿಗೆಯೆಂದಾಯಿತು
ನಾ ಹರ್ಷದಿ ಕಂಬನಿಯಿತ್ತೆ
ಮತ್ತೆ ಇವರ ನೋಡಲು ಹಾತೊರೆದೆ
ವಿಧಿಯಾಟವ ಹೊಗಳಿದೆ
ನನ್ನ ಬಾಳಲಿ ಅರುಣೋದಯವಾಗಿದೆ
ನೆನಪಿನ ಸುರುಳಿಯಲಿ ಧ್ವನಿಯಿಲ್ಲವಾಗಿದೆ
ಕನಸಿನಂತೆ ಕಣ್ಮುಂದೆ ತೇಲಿದೆ
ಆ ಏಳು ದಿನಗಳ ಕಾದಾಟ
ಈಗ ಸವಿನೆನಪಾಗಿದೆ
ಇವರು ಕಚೇರಿಯಿಂದ ತೆರಳಲು
ನಾ ಕಾಯುತಿರುವೆ
ಆ ಮೊದಲ ನೋಟದ ಮಾಯೆ
ಇಂದಿಗೂ ಮರೆಯಾಗದೆ ಉಳಿದಿದೆ
* ಇದು ಪದ್ಯವೋ ಗದ್ಯವೋ ನನಗೆ ಗೊತ್ತಿಲ್ಲ..ಭಾವನೆಗಳನ್ನು ಬರೆಯಲು ಮನಸಾಯ್ತು..ಮನ:ಪಟಲದಿಂದ ಅಳಿಸದಿರಲಿ ಎಂದು..
Subscribe to:
Posts (Atom)